ನಮ್ಮೂರ ಹೋಳಿ ಹಾಡು – ೨

ಮೂಢತನವು ಸೇರಿತೇ
ರೂಢೀಶ ನಿನ್ನಗೆ
ಬ್ಯಾಡ ಶಿವನ ಕೂಡ ಹಗೆ ||ಪ||

ಜನನ ಸ್ಥಿತಿ ಸಂಹಾರ ಕರ್ತ
ಘನ ಮಹೇಶನು|
ತಾ ಯಾರಿಗೆ ಸಿಲುಕನು ||೧||

ಮನಕೆ ತಿಳಿಯೋ
ಜನಕ ನಿನ್ನ
ತನುಜೆ ಮಾತನು |
ನಾ ಮುಗಿವೆ ಕೈಯನು ||೨||

ಅದಿ ಅಂತ್ಯವಿಲ್ಲದ
ಪರನಾದ ಭಾವವೋ
ತಿಳಿಯದೋ
ಮಹಿಮವು ||೩||

ವೇದಗಳಿಗೆ ನಿಲುಕದಂಥ
ನಾದ ವಸ್ತುವೋ
ಬಿಡು ನೀನಿನ್ನ
ವೈರವೊ ||೪||

ಬ್ರಹ್ಮ-ವಿಷ್ಣು-ಸಂತರುಗಳು
ಒಮ್ಮೆ ಕಾಣರೋ
ಇನ್ನೂ
ಧ್ಯಾನಿಸುತಲಿಹರೋ ||೫||

ಹಮ್ಮಿದ್ಯಾತಕೆ
ಈ ಯಜ್ಞ
ಸಾಕು ಮಾಡಿನ್ನು
ಕೇಳೆಮ್ಮ ಮಾತನ್ನು ||೬||

ಶಿವನು ಇಲ್ಲದಂಥ ಯಜ್ಞ
ಹವಿಯ(ಸ್ಸು?) ಭಾಗವ
ಮತ್ತಾರು
ಕೊಂಬುವಾ ||೭||

ಭುವನದೊಡೆಯ ಕೇಳೋ
ಬೇಗ ನಡೆಯದ್ಯಾಗವ
ಬಿಡು ಸುಮ್ಮನೆ
ವೈರವ ||೮||

ಇಷ್ಟು ಬಗೆಯ ಬುದ್ದಿ
ಹುಟ್ಟಿತ್ಹೇಗೆ
ಇವನೊಳು
ಬಿಡನೆ ಕೆಟ್ಟತನಗಳು ||೯||

ಸಿಟ್ಟಿನಿಂದ ಹೋಮಗೊಂಡ
ಮೆಟ್ಟಿ ಹಾರಲು
ಸತಿ ತಾ
ನಷ್ಟವಾದಳು ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನಮ್ಮ
Next post ಬೆಕ್ಕೇ ಬೆಕ್ಕೇ ಮಾರ್ಜಾಲ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys